DAKSHINA KANNADA
ಮಂಗಳೂರು ನಗರಕ್ಕೆ 32 ಕೋ.ರೂ. ವೆಚ್ಚದ ಕಮಾಂಡ್ ಕಂಟ್ರೋಲ್ ಸೆಂಟರ್ ಫೇಸ್-2 : ಚೈನಾ ಮಾಲ್..! ಬ್ಲ್ಯಾಕ್ ಲಿಸ್ಟ್ ಕಂಪೆನಿಗೆ ಟೆಂಡರ್..!?
ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆರಂಭಿಸಲಾಗಿರುವ ಸರಿಸುಮಾರು 32 ಕೋಟಿ ರೂಪಾಯಿ ವೆಚ್ಚದ ಕಮಾಂಡ್ ಕಂಟ್ರೋಲ್ ಸೆಂಟರ್ ಫೇಸ್-2ವನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಗುತ್ತಿಗೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪಾಲಿಕೆಯ ಸದನದಲ್ಲಿ ಆಡಳಿತ ಪಕ್ಷ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವೆ ಮಾತಿನ ಜಟಾಪಟಿ ನಡೆದು ಕೊನೆಗೆ ಪಾಲಿಕೆ ಆಯುಕ್ತರು ಮಧ್ಯೆ ಪ್ರವೇಶಿಸಿ ವಿಪಕ್ಷ ನಾಯಕರನ್ನು ಸುಮ್ಮನಿರಿ ಎಂದು ಗದರಿಸಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಯಿತು.
ಮೇಯರ್ ಜಯಾನಂದ ಅಂಚನ್ ಅಧ್ಯಕ್ಷತೆಯಲ್ಲಿ ಇಂದು ನಡೆದ ಪಾಲಿಕೆ ಸಭೆಯಲ್ಲಿ ಈ ಯೋಜನೆಯಲ್ಲಿ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರವಾಗಿದೆ ಎಂಬ ಆರೋಪ ವಿಪಕ್ಷವಾದ ಕಾಂಗ್ರೆಸ್ ಸದಸ್ಯರು ಮಾಡಿದ್ದು ಈ ಸಂದರ್ಭ ಕಮಾಂಡ್ ಕಂಟ್ರೋಲ್ ಸೆಂಟರ್ ಫೇಸ್ -2 ಯೋಜನೆ ಬಗ್ಗೆ ವಿಪಕ್ಷ ಸದಸ್ಯರು ಮೇಯರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಸದ್ಯ ಈ ಕಮಾಂಡ್ ಸೆಂಟರ್ ಗುತ್ತಿಗೆಯನ್ನು ಟೆಕ್ನಾಸಿಸಿ ಸೆಕ್ಯೂರಿಟೀಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಗೆ ನೀಡಲಾಗಿದೆ.
ಚೀನಾ ನಿರ್ಮಿತ ಯಾವುದೇ ಪರಿಕರಗಳನ್ನು ಭದ್ರತಾ ದೃಷ್ಟಿಯಿಂದ ಅಳವಡಿಸಬಾರದು ಎನ್ನುವ ಕಾನೂನು ಇದ್ದರೂ ಕೂಡಾ ಅದನ್ನು ಇಲ್ಲಿ ಅಳವಡಿಸಿರುವುದು ಏಕೆಂದು ಕಾಂಗ್ರೆಸ್ಸಿನ ಎ ಸಿ ವಿನಯರಾಜ್ ಪ್ರಶ್ನಿಸಿದರು.
ವಿಶೇಷವಾಗಿ ಭದ್ರತಾ ದೃಷ್ಟಿಯಿಂದ ಅಳವಡಿಸಲಾಗುವ ಇದರ ಎಲ್ಲಾ ಪರಿಕರಗಳೂ ಸೂಕ್ತವಾಗಿಲ್ಲ ಎಂದು ಕಂಪೆನಿಯನ್ನು ಈಗಾಗಲೇ ಬ್ಲ್ಯಾಕ್ ಲಿಸ್ಟಿಗೆ ಸೇರಿಸಲಾಗಿದೆ.
ಹೀಗಿರುವಾಗ ಈ ಕಂಪೆನಿಗೆ ಕಮಾಂಡ್ ಕಂಟ್ರೋಲ್ ಸಿಸ್ಟಂನ ಗುತ್ತಿಗೆ ನೀಡಿರುವುದು ಸರಿಯಲ್ಲ ಎಂದು ವಾದಿಸಿದರು.
ಇದಕ್ಕೆ ಎಲ್ಲಾ ಸದಸ್ಯರೂ ಬೆಂಬಲಿಸಿದರು. ಈಗಾಗಲೇ ಕಪ್ಪುಪಟ್ಟಿಗೆ ಸೇರಿಸಲಾಗಿರುವ ಕಂಪೆನಿಯೊಂದಕ್ಕೆ ಈ ಕಮಾಂಡ್ ಸೆಂಟರನ್ನು ಕಂಟ್ರೋಲ್ ಮಾಡಲು ನೀಡಿರುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
ಈ ವೇಳೆ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಮಧ್ಯ ಪ್ರವೇಶಿಸಿ ಕಾಂಗ್ರೆಸ್ ಸದಸ್ಯರನ್ನು ಸುಮ್ಮನಿರಿ ಎಂದು ಗದರಿಸಿದ್ದು ಆಕ್ರೋಶಕ್ಕೆ ಕಾರಣವಾಯಿತು. ಅವರ ಹೇಳಿಕೆ ಖಂಡಿಸಿ ಸದನದ ಬಾವಿಗಿಳಿದು ಪ್ರತಿಭಟಿಸಿದರು.
ಸ್ಮಾರ್ಟ್ ಸಿಟಿ- ಕಮಾಂಡ್ ಕಂಟ್ರೋಲ್ ಸೆಂಟರ್ ಫೇಸ್-1 & 2
ಕಮಾಂಡ್ ಕಂಟ್ರೋಲ್ ಸೆಂಟರ್ ಫೇಸ್-1- ಟೆಂಡರ್ ಮೊತ್ತ- ರೂ.23.4 ಕೋಟಿ, ಇದರಲ್ಲಿ ಇಂಟೆಲಿಜೆಂಟ್ ಟ್ರಾನ್ಸ್ಪೋರ್ಟ್ ಸಿಸ್ಟಂ, ಸಾಲಿಡ್ ವೇಸ್ಟ್ – ಮ್ಯಾನೇಜ್ಮೆಂಟ್, ಇನ್ಸಿಡೆಂಟ್ ಲಿಪೋರ್ಟಿಂಗ್, ಪ್ರಾಪರ್ಟಿ ಟ್ಯಾಕ್ಸ್, ಟ್ರೇಡ್ ಲೈಸೆನ್ಸ್, ಬರ್ತ್ ಅಂಡ್ ಡೆತ್ ಸರ್ಟಿಪಿಕೇಟ್, ಆ್ಯಡ್ ಹೋಡಿಂಗ್ಸ್, ಇ-ಮಾರ್ಕೆಟ್ ವ್ಯವಸ್ಥೆಗಳನ್ನು ಒಳಗೊಂಡಂತಹ ಯೋಜನೆ, ಕೆಲವೊಂದು ವಿಭಾಗಗಳು ಈಗಾಗಲೇ ಕಾರ್ಯರೂಪಕ್ಕೆ ಬಂದಿರುತ್ತದೆ.
ಕಮಾಂಡ್ ಕಂಟ್ರೋಲ್ ಸೆಂಟರ್ ಫೇಸ್-2, ಒಟ್ಟು ಮೊತ್ತ 32 ಕೋಟಿ ಯೋಜನೆ ಆಗಿರುತ್ತದೆ.
ಈ ಯೋಜನೆಯಲ್ಲಿ ಸುಮಾರು 6 ಕಂಪೆನಿಗಳು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿರುತ್ತದೆ. ಅದು ಕೇರಳ ಸ್ಟೇಟ್ ಇಲೆಕ್ಟ್ರಾನಿಕ್ಸ್ ಡೆವಲಪ್ಮೆಂಟ್ ಕಾರ್ಪೋರೇಷನ್ ಲಿಮಿಟೆಡ್ (ಕೆಲ್ಟಾನ್ ಅಮಿಟೆಡ್. ಮೆಡ್ರಾಸ್_ಸೆಕ್ಯುರಿಟೀಸ್ ಪ್ರಿಂಟರ್ ಪ್ರೈವೆಟ್ ಲಿಮಿಟೆಡ್, ಸಿ.ಎಂ.ಎಸ್ ಕಂಪ್ಯೂಟರ್, ಅಮಿಟೆಡ್, ಮ್ಯಾಟ್ರಿಕ್ಸ್ ಸೆಕ್ಯುಲಿಟಿ ಆ್ಯಂಡ್ ಸರ್ವಲೆನ್ಸ್ ಪ್ರೈವೆಟ್ ಲಿಮಿಟೆಡ್, ಐ.ಟಿ.ಐ ಲಿಮಿಟೆಡ್, ಟೆಕ್ನಾಸಿಸ್ ಸೆಲ್ಯುಲಿಟೀಸ್ ಸಿಸ್ಟಂ ಪ್ರೈವೆಟ್ ಲಿಮಿಟೆಡ್.
ಟೆಂಡರ್ ಪ್ರಕ್ರಿಯೆಯಲ್ಲಿ ಮೆಡ್ರಾಸ್ ಸೆಲ್ಯುಲಿಟಿ ಕಂಪೆನಿ ಮತ್ತು ಸಿ.ಎಂ.ಎಸ್ ಕಂಪೆನಿಗಳು ಟೆಕ್ನಿಕಲ್ ಅಡ್ಡಿನಲ್ಲಿ ಅನರ್ಹ ಎಂದು ಆದೇಶವಾಗಿರುತ್ತದೆ.
ಇದರಲ್ಲಿ ಸಿ.ಎಂ.ಎಸ್ ಎಂಬ ಕಂಪೆನಿಯು ಭಾರತ ದೇಶದಲ್ಲಿಯೇ ಕಮಾಂಡ್ ಕಂಟ್ರೋಲ್ ಸೆಂಟರ್ ಅನುಷ್ಠಾನ ಮಾಡುವುದರಲ್ಲಿ ದಿಗ್ಗಜನಾಗಿದ್ದು, ಇವರು ಸೀಮನ್ ఎంబ ವಿದೇಶಿ ಕಂಪೆನಿಯಿಂದ ತಾಂತ್ರಿಕತೆಯನ್ನು ಪಡೆಯುವ ಕಂಪೆನಿಯಾಗಿರುತ್ತದೆ.
ಈಗಾಗಲೇ ಮುಂಬೈ ನಗರ, ಗುಜರಾತಿನ ಅಹ್ಮದಾಬಾದ್ ಹಾಗೂ ಬರೋಡ ಮುಂತಾದ ಬೃಹತ್ ನಗರಗಳಲ್ಲಿ ಕಮಾಂಡ್ ಕಂಟ್ರೋಲ್ ವ್ಯವಸ್ಥೆಯನ್ನು ಅಳವಡಿಸಿರುವ ಕಂಪೆನಿಯಾಗಿರುತ್ತದೆ.
• ಐ.ಟಿ.ಐ ಲಿಮಿಟೆಡ್ (ಸರಕಾರಿ ಸ್ವಾಮ್ಮ) ಹೆಚ್ಚಿನ ಮೊತ್ತವನ್ನು ಸಲ್ಲಿಸಿದ ಕಾರಣ ಹೊರಬಿದ್ದಿದ್ದು ಮತ್ತು ಮ್ಯಾಟ್ರಿಕ್ಸ್ ಎಂಬ ಕಂಪೆನಿ ಟೆಕ್ನಿಕಲ್ ಬಿನಲ್ಲಿ ಪ್ರಥಮ ಅಂಕವನ್ನು ಪಡೆದ ಕಂಪೆನಿ ಆಗಿದ್ದು ಅದು ಕೂಡಾ ಹೆಚ್ಚಿನ ಮೊತ್ತವನ್ನು ಅಡ್ಡಿಂಗ್ ಮಾಡಿ ಹೊರಬಿದ್ದಿರುತ್ತದೆ.|
ಕಮಾಂಡ್ ಅಂಟ್ರೋಲ್ ಸೆಂಟರ್ ಫೇಸ್-2 ಟೆಂಡರ್ ನಲ್ಲಿ ಟೆಕ್ನಸಿಸಿ ಸೆಕ್ಯೂರಿಟಿಸ್ ಪ್ರೈವೆಟ್ ಅಮಿಟೆಡ್ ಎಂಬ ಕಂಪೆನಿಯು ಅರ್ಹ ಕಂಪೆನಿ ಮತ್ತು ಸಕ್ಸಸ್ ಪುಲ್ ಬಿಡ್ಡರ್ ಎಂದು ಘೋಷಣೆಯಾಗಿರುತ್ತದೆ.
• ಆದರೆ ಈ ಕಂಪೆನಿಯು ಭೋಪಾಲ್ ಮತ್ತು ಘಾಜಿಯಾಬಾದ್ ನಲ್ಲಿ ಇಂತದ್ದೇ ಯೋಜನೆ ಅನಷ್ಠಾನ ಮಾಡುವಲ್ಲಿ ವೈಫಲ್ಯವನ್ನು ಅಂಡು ಕಪ್ಪು ಪಟ್ಟಿಗೆ ಸೇರ್ಪಡೆಯಾಗಿರುತ್ತದೆ. ಈ ಕಂಪೆನಿಗೆ ಈ ಯೋಜನೆ ಸಿಗುವಂತೆ ಮಾಡಲು ಈ ಯೋಜನೆಯ ಕನ್ಸಲೆಂಟ್ ಇರುವಂತಹ ನೈಸ್ ಎನ್ ಸೋನ್ ಕಂಪೆನಿಯ ಕೈಯಾಡಿಸಿರುತ್ತದೆ. ಆಗಿರುವಂತಹ ಸ್ಟೆಪ್-ಎನ್-ಸ್ಟೋನ್ ಕಂಪೆನಿಯು ಕೈಯಾಡಿಸಿರುತ್ತದೆ, ಕಾರಣ ಕಂಪೆನಿಯು ಕಂಪೆನಿಯ ಅಧಿಕಾರಿಗಳ ಪ್ರೀತಿಯ ಕಂಪೆನಿಯಾಗಿರುತ್ತದೆ. ಉಳಿದ ಅಂಪನಿಗಳನ್ನು ಹೊರ ಹಾಕುವಲ್ಲಿ ಟೆಂಡರ್ ಇವಲ್ಯುವೇಷನ್ ಸಮಿತಿಯ ಮೇಲೆ ಒತ್ತಡ ಎಂದು ಯಶಸ್ಸನ್ನು ಕಂಡಿದೆ. ಯಾಕೆಂದರೆ ಈ ಕನ್ಸಲ್ಟೆಂಟ್ ಕಂಪೆನಿ ಕೂಡ ಇವ್ಯಾಲ್ಯುವೇಷನ್ ಸಮಿತಿಯ ಸದಸ್ಯನೇ ಆಗಿರುತ್ತದೆ.
ಈ ಕನ್ಸಲ್ಟೆಂಟ್ ಕಂಪೆನಿಯು ಸ್ವತಃ ರಡಾರ್ ಹಾರ್ಡವೇರ್ ಡಿಸ್ಟಿಬ್ಯೂಟರ್ ಆಗಿದ್ದು ಅವರ ಅ ಹಾರ್ಡ್ವೇರ್ ನ್ನು ಈ ಟೆಕ್ನಾಸಿಸ್ ಕಂಪೆನಿಯು ಖರೀದಿ ಮಾಡಲು ಸಂಚು ಮಾಡಿದ್ದು, ಹಾಗೂ ಈ ಯೋಜನೆಗೆ ಬೇಕಾದಂತಹ ಇತರ ಎಲ್ಲಾ ಇಲೆಕ್ಟ್ರಾನಿಕ್ ಡಿವೈಸ್ ಗಳನ್ನು ಇವರು ಹೇಳಿದ ಕಂಪೆನಿಯಿಂದ ಖರೀದಿ ಮಾಡಲು ಸಂಚು ನಡೆಸಿದ್ದು, ಇದರಿಂದ ಕನ್ಸಲೆಂಟ್ ಕಂಪೆನಿಯು ಮಂಗಳೂರು ಸ್ಮಾರ್ಟ್ ಸಿಟಿ ಕಂಪೆನಿಯಿಂದ ಸರ್ವಿಸ್ ಚಾರ್ಜ್ ಮಾತ್ರವಲ್ಲದೇ ಡಿವೈಸ್ ಗಳನ್ನು ಖರೀದಿ ಮಾಡುವಲ್ಲಿ ಕೋಟಿಗಟ್ಟಲೆ ಕಮಿಷನ್ ಪಡೆಯಲು ಸಂಚು ನಡೆಸಿರುತ್ತದೆ.
ಇದು ಮಾತ್ರವಲ್ಲದೇ ಇದೇ ಆನ್ಸಲೆಂಟ್ ಕಂಪೆನಿಯು ಈ ಯೋಜನೆಗೆ ಬೇಕಾದಂತಹ ರಿಕ್ವೆಸ್ಟ್ ಫಾರ್ ಪ್ರೋಪೋಸಲ್ ತಯಾರಿ ಮಾಡಿರುತ್ತದೆ. ಈ ಯೋಜನೆಯ ತಾಂತ್ರಿಕ ಮತ್ತು ಡಿವೈಸ್ಗಳನ್ನು ಡಿಪಿಆರ್ ಗಳಲ್ಲಿ ಹಾಕುವಂತಹ ಸಂಧರ್ಭದಲ್ಲಿ ಈ ಕಂಪೆನಿಗೆ ಸಂಭಂಧ ಇರುವಂತಹ ಅಂಪೆನಿಗಳು ತಯಾರಿಸುವ ಡಿವೈಸ್ಗಳ ಸ್ಪೆಸಿಫಿಕೇಷನ್ಗಳನ್ನು ಇಳವಡಿಸಿರುತ್ತದೆ. ಯಾಕೆಂದರೆ ಈ ಸ್ಪೆಸಿಫಿಕೇಷನ್ ಇರುವ ಹಾರ್ಡ್ವೇರ್ಗಳು, ಕೆಲವೇ ಅಂಪೆನಿಗಳಿಂದ ಖರೀದಿ ಮಾಡುವಂತೆ ಇದ್ದು, ಇದು ಈ ಕನ್ಸಲ್ಲೆಂಟ್ ಕಂಪೆನಿಗೆ ಹತ್ತಿರವಿರುವ ಕಂಪೆನಿಗಳಾಗಿರುತ್ತವೆ. ಈ ಆನ್ಸಸ್ಟೆಂಟ್ ಕಂಪೆನಿಗೆ ಕೇವಲ 3 ವರ್ಷದ ಪರಿಣತಿ ಇದ್ದು, ಸ್ಕಾರ್ಟ್ ಸಿಟಿ ಕಂಪೆನಿಯ ಮೇಲಾಧಿಕಾರಿಗಳ ಕೃಪಾಕಟಾಕ್ಷದಿಂದ ಕಮಾಂಡ್ ಕಂಟ್ರೋಲ್ ಸೆಂಟರ್ ಗೆ ಕನ್ಸಲೆಂಟ್ ಆಗಿ ಆಯ್ಕೆಯಾಗಿರುತ್ತದೆ.
ಈ ಮೊದಲು ವಾಡಿಯ ಟಿನ್ನೋ ಇಂಜಿನಿಯರಿಂಗ್ ಸರ್ವಿಸಸ್ ಲಿಮಿಟೆಡ್ ಇವರು ಕಮಾಂಡ್ ಕಂಟ್ರೋಲ್ ಸೆಂಟರಿಗೆ ಸಿ-ಡ್ಯಾಕ್ ಎಂಬ ಪಬ್ಲಿಕ್ ಸೆಕ್ಟರ್ ಪಿ.ಎಸ್.ಯು ಕಂಪೆನಿಯನ್ನು ಕನ್ಸಲೆಂಟ್ ಆಗಿ ಪಡೆದುಕೊಂಡಿತ್ತು. ಸುಮಾರು 6 ತಿಂಗಳಿಂದ ಈ ಯೋಜನೆ ಅನುಷ್ಠಾನ ಮಾಡುವ ಬಗ್ಗೆ ಯಾವುದೇ ಪ್ರಗತಿ ಇಗಿರುವುದಿಲ್ಲ. ಇದಕ್ಕೆ ಕಾರಣ ಏನು?..
DAKSHINA KANNADA
Mangaluru: ಧಕ್ಕೆಯಲ್ಲಿ ಬ್ಯಾನರ್ ವಿವಾದ – ಮೀನುಗಾರರ ಸಂಘದಿಂದ ಸ್ಪಷ್ಟನೆ
ಮಂಗಳೂರು: ಮೀನುಗಾರಿಕಾ ಧಕ್ಕೆಯಲ್ಲಿ ವಿವಾದಕ್ಕೆ ಕಾರಣವಾಗಿರುವ ಈದ್ ಮಿಲಾದ್ ಬ್ಯಾನರ್ ಕುರಿತು ಹಸಿ ಮೀನುಗಾರರ ಸಂಘ ಸ್ಪಷ್ಟನೆ ನೀಡಿದೆ.
ಹಸಿ ಮೀನು ವ್ಯಾಪಾರಸ್ಥರ ಸಂಘ, ಸದಸ್ಯರು ಅವರರವರು ಆಚರಿಸಿಕೊಂಡು ಬರುತ್ತಿರುವ ಧಾರ್ಮಿಕ ಹಬ್ಬ ದಿನಗಳಲ್ಲಿ ತಮ್ಮ ವ್ಯವಹಾರಕ್ಕೆ ಖಡ್ಡಾಯ ರಜೆ ಹೊಂದುವ ಪೂರ್ವ ನಿರ್ಧರಿತ ಪದ್ಧತಿಯಂತೆ ಈ ಬಾರಿ ಬರುವ ಸೆ. 28 ರಂದು ಮುಸ್ಲಿಮ್ ಭಾಂದವರ ಹಬ್ಬವಾದ ಈದ್ ಮಿಲಾದ್ ಪ್ರಯುಕ್ತ ಅವರು ಮತ್ತು ಇತರ ಧರ್ಮ ಭಾಂದವರು ಖಡ್ಡಾಯ ರಜೆ ಪಾಲಿಸುವ ಬಗ್ಗೆ ವಿವಿಧ ಸಂಘಗಳಲ್ಲಿ ನಿರ್ಣಯಿಸಿದಂತೆ ಪ್ರಕಟಣೆ ಫಲಕ ಅಳವಡಿಸಲಾಗಿರುತ್ತದೆ.
ಅದೇ ರೀತಿಯಲ್ಲಿ ವರ್ಷದ ಇತರ ದಿನಗಳಲ್ಲಿ ಇತರ ಹಬ್ಬಗಳಾದ ಬಾರ್ಕೂರು ಪೂಜೆ,ಉಚ್ಚಿಲ ಪೂಜೆ, ಗಣೇಶ ಚತುರ್ಥಿ, ಈದ್ ಉಲ್ ಫಿತರ್, ಬಕ್ರೀದ್, ಈದ್ ಮಿಲಾದ್, ಗುಡ್ ಫ್ರೈಡೇ ಮತ್ತು ಕ್ರಿಸ್ಮಸ್ ಎಂಬಿತ್ಯಾದಿ ಶುಭ ದಿನಗಳಲ್ಲಿ ಕೂಡಾ ಸಂಘಗಳ ನಿರ್ಣಯದಂತೆ ಮಾರಾಟಗಾರರು ಖಡ್ಡಾಯ ರಜೆ ಹೊಂದಿ ಆ ದಿನದ ಮಟ್ಟಿಗೆ ಮೀನುಗಾರಿಕಾ ಮಾರಾಟ ಚಟುವಟಿಕೆ ಸ್ಥಗಿತ ಗೊಳಿಸುವುದು ಅನೇಕ ವರ್ಷಗಳಿಂದ ನಡೆದು ಕೊಂಡು ಬಂದಿರುತ್ತದೆ.
ಮಂಗಳೂರು ದಕ್ಕೆಯಲ್ಲಿ ಮೀನುಗಾರಿಕಾ ಚಟುವಟಿಕೆಯಲ್ಲಿ ಹಸಿ ಮೀನು ಮಾರಾಟಗಾರರ ಮತ್ತು ಕಮಿಷನ್ ಏಜೆಂಟರ ಸಂಘ, ಪರ್ಶಿಯನ್ ಬೋಟ್ ಯೂನಿಯನ್, ಟ್ರಾಲ್ ಬೋಟ್ ಯೂನಿಯನ್, ಫಿಶ್ ಬಯ್ಯರ್ಸ್ ಎಸೋಸಿಯೇಶನ್ ಮತ್ತಿತರ ಸಂಘಗಳು ಸಂಯುಕ್ತವಾಗಿ ಈ ರಜೆಗಳನ್ನು ನಿರ್ಧರಿಸಿದ್ದಾರೆ.
ಆದರೆ ಇತ್ತೀಚೆಗೆ ಸಾಮಾಜಿಕ ಜಾಲ ತಾಣದಲ್ಲಿ ಸಂಘದ ಮೀಲಾದ್ ರಜೆಯ ಪ್ರಕಟನಾ ಫಲಕ ( ಫ್ಲೆಕ್ಸ್ ) ದ ಬಗ್ಗೆ ಕೆಲವರು ತಪ್ಪು ಗ್ರಹಿಕೆಯ ಪ್ರಚೋದನಾತ್ಮಕ ಮಾಹಿತಿ ಹಂಚುತ್ತಿರುವುದು ಖೇದಕರ.
ಇಂತಹ ತಪ್ಪು ಮಾಹಿತಿ ಗಳಿಂದ ಸಾರ್ವಜನಿಕರು ಗೊಂದಲಕ್ಕೆ ಒಳಗಾಗಬಾರದು ಎಂದು ಮಂಗಳೂರು ದಕ್ಕೆ ಹಸಿಮೀನು ಮಾರಾಟಗಾರರ ಮತ್ತು ಕಮಿಷನ್ ಏಜೆಂಟರ ಸಂಘದ ಅಧ್ಯಕ್ಷ ಕೆ.ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
DAKSHINA KANNADA
Ullala: ರೈಲಿನಡಿಗೆ ತಲೆಯಿಟ್ಟು ಅವಿವಾಹಿತ ವ್ಯಕ್ತಿ ಜೀವಾಂತ್ಯ..!
ಉಳ್ಳಾಲ: ವ್ಯಕ್ತಿಯೊಬ್ಬರು ರೈಲಿನಡಿಗೆ ತಲೆಯಿಟ್ಟು ಜೀವಾಂತ್ಯ ಮಾಡಿಕೊಂಡಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಉಚ್ಚಿಲ ರೈಲ್ವೇ ಗೇಟ್ ಬಳಿ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಮಂಗಳೂರು ನಗರದ ಕೊಂಚಾಡಿಯ ನಿವಾಸಿಯಾಗಿರುವ ಪ್ರಶಾಂತ್ (44) ಎಂದು ಗುರುತಿಸಲಾಗಿದೆ.
ಸೆ.24 ರಂದು ಸಂಜೆ ಮನೆಯಿಂದ ಹೊರಟ ಪ್ರಶಾಂತ್ ಅವರು ಇಂದು ಬೆಳಗ್ಗೆ ರೈಲ್ವೇ ಗೇಟ್ ಬಳಿ ಶವವಾಗಿ ಪತ್ತೆಯಾಗಿದ್ದಾರೆ.
ಆಕ್ಟಿವಾ ಸ್ಕೂಟರನ್ನು ಉಳ್ಳಾಲದ ರೈಲ್ವೇ ನಿಲ್ದಾಣದಲ್ಲಿರಿಸಿ, ಉಚ್ಚಿಲ ರೈಲ್ವೇ ಗೇಟ್ ವರೆಗೆ ನಡೆದುಕೊಂಡು ಹೋಗಿ ರೈಲ್ವೇ ಹಳಿಯಲ್ಲಿ ತಲೆಯಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವಿವಾಹಿತರಾಗಿದ್ದ ಪ್ರಶಾಂತ್ ಅವರಿಗೆ ಯಾವುದೇ ಸಮಸ್ಯೆಗಳಿರಲಿಲ್ಲ.
ಅವರು ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ವೈದ್ಯಕೀಯ ವರದಿಯಿಂದ ಲಭ್ಯವಾಗಿದೆ.
ಮಂಗಳೂರು ರೈಲ್ವೇ ಪೊಲೀಸ್ ಠಾಣೆಯ ಎಎಸ್ ಐ ಮಧುಚಂದ್ರ ನೇತೃತ್ವದಲ್ಲಿ ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
DAKSHINA KANNADA
2ನೇ ಮದುವೆಯಾದ ಕಿರುತೆರೆ ನಟಿ ಜ್ಯೋತಿ ರೈ …!
ಕಿರುತೆರೆ ನಟಿ ಜ್ಯೋತಿ ರೈ ಬೋಲ್ಡ್ ಆಗಿ ಫೋಟೋಗಳಿಗೆ ಪೋಸ್ ನೀಡುತ್ತಿದ್ದು, ಈ ಫೋಟೋಸ್ ಗಳನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಬೆಂಗಳೂರು : ಕನ್ನಡದ ಅನೇಕ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿರುವ ನಟಿ ಜ್ಯೋತಿ ರೈ ಅವರ ಪರಿಚಯ ಬಹುತೇಕ ಎಲ್ಲಾ ಕನ್ನಡಿಗರಿಗೆ ಇದೆ. ಸರಿ ಸುಮಾರು 20ಕ್ಕು ಹೆಚ್ಚು ಕನ್ನಡ ಧಾರವಾಹಿಗಳಲ್ಲಿ ನಟಿ ಜನರ ಮನಸ್ಸು ಗೆದ್ದ ಸಹಜ ಸುಂದರಿ ಜ್ಯೋತಿ ರೈ. ಮೂರುಗಂಟು, ಕನ್ಯಾದಾನ, ಅನುರಾಗ ಸಂಗಮ, ಗೆಜ್ಜೆ ಪೂಜೆ, ಕಸ್ತೂರಿ ನಿವಾಸ, ಕಿನ್ನರಿ ಧಾರಾವಾಹಿಗಳನ್ನು ಜನರು ಹೇಗೆ ಮರೆಯಲು ಸಾಧ್ಯ ಅಲ್ವಾ?
ಕೊಡಗಿನಲ್ಲಿ ಹುಟ್ಟಿ ಬೆಳೆದ ಬಂಟ ಸಮುದಾಯದ ನಟಿ ಜ್ಯೋತಿ ರೈ ಓದಿದ್ದು ಪುತ್ತೂರಿನಲ್ಲಿ.8ನೇ ತರಗತಿ ಓದುವಾಗಲೇ ಆಕೆ ಅಪ್ಪನನ್ನು ಕಳೆದುಕೊಂಡರು.ಕಡು ಬಡತನದಲ್ಲಿ ಬೆಳೆದ ಈಕೆ ಅನೇಕ ಸವಾಲುಗಳನ್ನು ಎದುರಿಸಿ ಒಂದು ಎಂಎನ್ಸಿ ಕಂಪೆನಿಯಲ್ಲಿ ಕೆಲಸವನ್ನು ಪಡೆದುಕೊಂಡಿದ್ರು.
ಇದಾದ ನಂತರ ಬೆಂಗಳೂರಿಗೆ ಬಂದು ‘ಬರತಾವ ಕಾಲ’ ಧಾರಾವಾಹಿಯಲ್ಲಿ ನಟಿಸಿದರು. ಅಲ್ಲಿಂದ ಮುಂದೆ ಸಾಲು ಸಾಲು ಧಾರಾವಾಹಿಗಳಲ್ಲಿ ನಟಿಸಿದರು. ನಿರೂಪಕಿಯಾಗಿಯೂ ಗಮನ ಸೆಳೆದು.20ನೇ ವಯಸ್ಸಿನಲ್ಲಿ ಮದುವೆ ಆಗಿದ್ದರು .
ಜ್ಯೋತಿ ರೈ 20ನೇ ವಯಸ್ಸಿನಲ್ಲೇ ಮದುವೆ ಆಗಿದ್ದರು.ನೆಟ್ವರ್ಕಿಂಗ್ ಇಂಜಿನಿಯರ್ ಪದ್ಮನಾಭ ಎಂಬುವವರ ಕೈ ಹಿಡಿದಿದ್ದರು. ದಂಪತಿಗೆ ಒಬ್ಬ ಮಗ ಕೂಡ ಇದ್ದಾನೆ.
ಜ್ಯೋತಿ ರೈ ಅಂದ್ರೆ ಪಕ್ಕಾ ಸಂಪ್ರದಾಯಸ್ಥ ಹೆಣ್ಣು ಮಗಳು. ಹೆಚ್ಚಾಗಿ ಸೀರೆ ಅಥವ ಚೂಡಿದಾರ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಜ್ಯೋತಿ ರೈ ವೆಸ್ಟ್ರನ್ ಔಟ್ ಫಿಟ್ ಗಳನ್ನು ಚೂಸ್ ಮಾಡೋದು ಬಹಳಾನೆ ಕಮ್ಮಿ.
ಆದ್ರೆ ಆಗ ಜ್ಯೋತಿ ರೈ ಕಂಡು ಇಡೀ ಚಿತ್ರರಂಗವೇ ನಿಬ್ಬೆರಗಾಗಿದೆ.
ಹೌದು ಸೋಷಿಯಲ್ ಮೀಡಿಯಾಗಳಲ್ಲಿ ಒಂದಾದ ಮೇಲೆ ಒಂದರಂತೆ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ ಜ್ಯೋತಿ ರೈ. ಅಲ್ಲದೆ Age is Just A Number ಎಂದು ಕೂಡ ಸಾಬೀತುಪಡಿಸಿದ್ದಾರೆ. ತುಂಬಾನೆ ಬೋಲ್ಡ್ ಆಗಿರುವ ಫೋಟೋಸ್ ಅಪ್ಲೋಡ್ ಮಾಡಿ ಇಷ್ಟರ ಮಟ್ಟಿಗೆ ಬದಲಾವಣೆನಾ ಅಂತ ಜನ ಶಾಕ್ ನಲ್ಲಿದ್ದಾರೆ.
ಮೊದಲ ಗಂಡನಿಂದ ದೂರಾಗಿ ಈಗ ಆದ್ರೆ ಇದೀಗ ಶುಕ್ರ, ಮಾತರಾನಿ ಮೌನಮಿದಿ, ಎ ಮಾಸ್ಟರ್ ಪೀಸ್’ ಚಿತ್ರಗಳನ್ನು ನಿರ್ದೇಶಿಸಿದ ಸುಕುಪುರ್ವಜ್ ಅಲಿಯಾಸ್ ಸುರೇಶ್ ಕುಮಾರ್ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಅನ್ನುವಂತಹ ಟಾಕ್ಸ್ ಇದೀಗ ಹರಿದಾಡುತ್ತಿವೆ.
ಅಲ್ದೇ ಸುರೇಶ್ ಜತೆಗಿರುವ ಫೋಟೊಗಳನ್ನು ನಟಿ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಈಗಾಗಿ ಇದೆಲ್ಲಾ ನಿಜ ಇರಬಹುದು ಅಂತ ಹೇಳಲಾಗ್ತಿದೆ.
ಯಾಕಂದ್ರೆ ಜ್ಯೋತಿ ರೈ ಅವರು ಇನ್ಸ್ಟಾಗ್ರಾಮ್ನಲ್ಲಿ Ask Me Anything Session ನಡೆಸಿದ್ದರು.
ಆ ವೇಳೆ ನೆಟ್ಟಿಗರು ಕೇಳಿದ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಅದರಲ್ಲಿ ಬಹಳ ಮುಖ್ಯವಾಗಿ ನೀವು ಸಿಂಗಲ್ ಹಾ??? ಅಂತ ನೆಟ್ಟಿಗರೊಬ್ರು ಪ್ರಶ್ನೆ ಮಾಡಿದ್ರು, ಅದಕ್ಕೆ ಜ್ಯೋತಿ ರೈ ಸುಕುಮಾರ್ ಪೂರ್ವಜ ಅವರನ್ನು ಕೇಳಿ ಅಂತ ಹೇಳಿದ್ರು.
ಎ ಮಾಸ್ಟರ್ ಪೀಸ್ ಎನ್ನುವ ಸಿರೀಸ್ನ್ನು ಸುಕುಮಾರ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಈಗ ಸುಕುಮಾರ್ ಜೊತೆಗಿನ ಫೋಟೋಗಳನ್ನೇ ಜ್ಯೋತಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಲ್ಳುತ್ತಲೇ ಇದ್ದಾರೆ.
- LATEST NEWS7 days ago
Udupi: ಪತಿಗೆ ಮೆಣಸಿನ ಹುಡಿ ಮಿಶ್ರಿತ ಕುದಿಯುವ ನೀರು ಎರಚಿದ ಪತ್ನಿ..!
- FILM6 days ago
ರಶ್ಮಿಕಾ ಮಂದಣ್ಣರನ್ನು ನೋಡಿ ಮುಖ ತಿರುಗಿಸಿದ ಶ್ರದ್ಧಾ ಕಪೂರ್
- DAKSHINA KANNADA5 days ago
Ullala: 25 ಕೋಟಿ ರೂ. ಲಾಟರಿ ಒಲಿದಿದೆ ಎಂಬ ಲಿಂಕ್ ಕಳುಹಿಸಿ ಮೋಜಿನಾಟ..!
- bangalore6 days ago
FILM: ಎಲ್ಲೆಲ್ಲೂ ‘ನಾನು ನಂದಿನಿ ಬೆಂಗಳೂರಿಗ್ ಬಂದೀನಿ’ ಸಾಂಗ್ ಹವಾ